ಪ್ರಮುಖ ಸುದ್ದಿ

ಸಗರಾದ್ರಿ ಬೆಟ್ಟದಲ್ಲೊಂದು ಸುಂದರ ತಾಣ, ಮನ ಸೆಳೆಯುತಿದೆ ಹಸಿರು ವಾತಾವರಣ

ಮಳೆಯಾಗಿದ್ದರಿಂದ ಹಚ್ಚ ಹಸಿರಿಗೆ ಮನಸೋತ ಜನತೆ

ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ನಗರದ ಸಗರಾದ್ರಿ ಬೆಟ್ಟದ ಕೋಟೆ ಹಿಂಬದಿ ಇರುವ ರಂಗನಾಥ ಸ್ವಾಮಿ ದೇವಾಲಯದ ಕೆಳಗಡೆ ಇರುವ ಗಿಡ ಮರಗಳ ಹಚ್ಚ ಹಸಿರು ತಾಣ ಮನುಜರನ್ನು ಕೈಬೀಸಿ ಕರೆಯುತ್ತಿದೆ.

ಗಿಡಮರಗಳ ಬುಡ ಪ್ರದೇಶ ಎಲ್ಲವೂ ಹಚ್ಚ ಹಸಿರಾಗಿದ್ದು, ನೋಡಲು ಅತ್ಯಾಕರ್ಷಕವಾಗಿ ಸುಂದರವಾಗಿ ಕಾಣುತ್ತಿದೆ. ಇದೇ ಮಾರ್ಗದಿಂದ ಮುಂದೆ ಹಳೇ ಜೀವೇಶ್ವರ ದೇವಾಲಯಕ್ಕೂ ಜನರು ಹೋಗುತ್ತಾರೆ.

ಲಾಕ್ ಡೌನ್ ಜಾರಿ ಇರುವದರಿಂದ ಶೈಕ್ಷಣಿಕ ಶಾಲಾ ಕಾಲೇಜುಗಳು ಸಹ ಆರಂಭವಾಗದ ಹಿನ್ನೆಲೆ, ಕೆಲಸ ಕಾರ್ಯಗಳಿಗೂ ಬ್ರೇಕ್ ಬಿದ್ದಿರುವ ಪರಿಣಾಮ ಜನರು, ಯುವ ಸಮೂಹ ಗುಡ್ಡದಲ್ಲಿರುವ ದೇವಸ್ಥಾನಗಳಿಗೆ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು, ಮಾಸ್ಕ್ ಸಮೇತ ಸ್ಯಾನಿಟೈಸರ್ ವ್ಯವಸ್ಥೆ ಮಾಡಿಕೊಂಡು ಸಗರಾದ್ರಿ ಬೆಟ್ಟದಲ್ಲಿರುವ ಹಳೇ ದೇವಾಸ್ಥಾನಗಳಾದ ಸಿದ್ಧಲಿಂಗೇಶ್ವರ ಬೆಟ್ಟ, ಮಹಾಲಕ್ಷ್ಮೀ ಗುಡಿ, ರಂಗನಾಥಸ್ವಾಮಿ ದೇವಾಲಯ, ಮೇಲುಗಿರಿ ಪರ್ವತ, ಜೀವೇಶ್ವರ ಸೇರಿದಂತೆ ಬಯಲು ಹನುಮನದೇವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.

ನಗರ ವ್ಯಾಪ್ತಿ ದೇವಸ್ಥಾನಗಳ ಬಾಗಿಲು ಮುಚ್ಚಿರುವದರಿಂದಲೂ ಜನರು ಬೆಟ್ಟ ಗುಡ್ಡದಡಿಯಲ್ಲಿರುವ ಪುರಾತನ ದೇವಾಲಯಗಳ ಮೊರೆ ಹೋಗಿದ್ದಾರೆ ಎಂದರೆ ತಪ್ಪಿಲ್ಲ. ಕಳೆದ ವಾರದಿಂದ ಉತ್ತಮ ಮಳೆ ಬೇರೆಯಾಗಿದ್ದರಿಂದ ಬೆಟ್ಟಗುಡ್ಡಗಳು ಹಸಿರಾಗಿ ಮನಸೂರೆಗೊಳ್ಳುತ್ತಿವೆ. ಹೀಗಾಗಿ ಜನರ ಮನಸ್ಸು ಬೆಟ್ಟಗಳ ಅತ್ತ  ಹರಿದಿದೆ.

ಬೆಳಗ್ಗೆಯಿಂದಲೇ ಬುತ್ತಿ ಮಾಡಿಕೊಂಡು ಬೆಟ್ಟ ಹತ್ತಿ ಸಂಜೆವರೆಗೂ ಶ್ರೀದೇವರ ದರ್ಶನ, ಊಟ ಉಪಚಾರ ನಂತರ ಮದ್ಯಾಹ್ನ ಒಂದಿಷ್ಟು ಮಲಗಿ ರೆಸ್ಟ್ ತೆಗೆದುಕೊಂಡು ಸಂಜೆ ಕೆಳಗಡೆ ಇಳಿಯುತ್ತಿರುವದು ಕಂಡು ಬರುತ್ತಿದೆ.

ಹಚ್ಚ ಹಸಿರು ಪರಿಸರಕ್ಕೆ ಮನಸೋತ ಜನರು ನಿತ್ಯ ಒಂದಿಲ್ಲೊಂದು ಗ್ರೂಪ್, ಗೆಳೆಯರ ಬಳಗ ಫ್ಯಾಮಿಲಿ ಈ ಪ್ರದೇಶದತ್ತ ಹೆಜ್ಜೆ ಹಾಕುತ್ತಿದ್ದಾರೆ.

ನಾವು ಸದಾ ಚಾರಣಿಗರು, ಸಮಯ ಸಿಕ್ಕಾಗಲೆಲ್ಲ ಬೆಟ್ಟಗುಡ್ಡ ಹತ್ತುತ್ತಿರುತ್ತೇವೆ. ಬೆಟ್ಟದ ಜೀವೇಶ್ವರ ಗುಡಿಗೆ ಯಾವಗಲೂ ಹೋಗುತ್ತಿರುತ್ತೇವೆ. ನಮ್ಮ ಕುಲ ಆರಾಧಕರಾದ ಹಿನ್ನೆಲೆ  ಜೀವೇಶ್ವರ ದೇವಸ್ಥಾನಕ್ಕೆ ಯಾವಾಗಲು ಹೋಗುತ್ತೇವೆ, ಮಳೆ ಸರಿಯಾಗಿ ಆಗಿದ್ದರಿಂದ ಈ ಪ್ರದೇಶದಲ್ಲಿ ಪ್ರಸ್ತುತ ಹಚ್ಚಹಸಿರಾಗಿದ್ದು, ಮನಸ್ಸಿಗೆ ಮುದ ನೀಡುತ್ತಿದೆ.  ಮನಸ್ಸು ಪ್ರಫುಲ್ಲಗೊಳ್ಳುತ್ತಿದೆ. ಸದಾ ಚಿಲಿಪಿಲಿ ಹಕ್ಕಿ, ಪಕ್ಷಿಗಳ ನಿನಾದ ಇಲ್ಲಿದೆ. ಶಾಂತತೆ ಪ್ರಶಾಂತೆಯಿಂದ ಕೂಡಿದೆ.

ಪ್ರವೀಣ ಫಿರಂಗಿ. ಶಿಕ್ಷಕ.  ಪ್ರವಾಸಿ.

Related Articles

4 Comments

Leave a Reply

Your email address will not be published. Required fields are marked *

Back to top button