ಪ್ರಮುಖ ಸುದ್ದಿ
ಮೈಸೂರು ದಸರಾ – ಗಜಪಡೆಗೆ ಮರಳು ಮೂಟೆ ತಾಲೀಮು ಆರಂಭ

ಮೈಸೂರು :ದಸರಾ ಹಬ್ಬಕ್ಕೆ ರಾಜ್ಯ ತಯಾರಿ ನಡೆಸುತ್ತಿದೆ. ನವರಾತ್ರಿಯ ಈ ಹಬ್ಬಕ್ಕೆ ಮೆರುಗು ನೀಡೋ ಗಜಪಡೆಗೆ ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು ಆರಂಭಗೊಂಡಿದೆ.
ಮರಳು ಮೂಟೆ ಹೊರಿಸುವ ಮುನ್ನ ಕೋಡಿ ಸೋಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದಸರಾ ಗಜಪಡೆಗೆ, ಗಾದಿ, ನಮ್ದಾ, ತೊಟ್ಟಿಲು, ಹಗ್ಗ ಹಾಗೂ ಮರಳು ಮೂಟೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ತಾಲೀಮು ಆರಂಭಿಸಲಾಯಿತು.
ಮತ್ತು ಗಜಪಡೆಗೆ ವಾಕಿಂಗ್ ಮಾಡಿಸಲಾಗುತ್ತಿದ್ದು, ಅರಮನೆಯಿಂದ ಸಯ್ಯಾಜೀರಾವ್ ರಸ್ತೆ, ಆಯುವೇರ್ದಿಕ್ ವೃತ್ತದ ಮೂಲಕ ಜಂಬೂ ಬಜಾರ್ ತಲುಪಿ ಹೈವೇ ಸರ್ಕಲ್ ಮೂಲಕ ದಸರಾ ಗಜಪಡೆ ಬನ್ನಿಮಂಟಪ ತಲುಪಲಿವೆ ಎಂದು ಹೇಳಲಾಗಿದೆ. ಜಂಬೂಸವಾರಿಯ ದಿನ ಯಾವುದೇ ತೊಂದರೆಯಾಗಬಾರದೆಂದು ತಾಲೀಮು ನಡೆಸಲಾಗುತ್ತಿದೆ.