ಪ್ರಮುಖ ಸುದ್ದಿ
”ಹೆಚ್.ಡಿ.ಕೆ ಒಕ್ಕಲಿಗರ ಸಿಎಂ ಅಲ್ಲ, ರಾಜ್ಯದ ಸಿಎಂ” : ಕಾಗಿನೆಲೆಶ್ರೀ ಗರಂ
ದಾವಣಗೆರೆ : ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ಕುರುಬ ಸಮುದಾಯದ ಅಧಿಕಾರಿಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಆಯಕಟ್ಟಿನಲ್ಲಿರುವ ಅಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದ್ದು ಹುದ್ದೆಯನ್ನೂ ತೋರಿಸದೆ ಕೂಡಿಸಲಾಗಿದೆ. ಹೀಗಾಗಿ, ಸೇಡಿನ ರಾಜಕಾರಣವನ್ನು ಬಿಟ್ಟು ಸಾಮರಸ್ಯದ ರಾಜಕಾರಣವನ್ನು ಮಾಡಬೇಕು. ಕಾರಣ ಹೆಚ್.ಡಿ.ಕುಮಾರಸ್ವಾಮಿ ಒಕ್ಕಲಿಗರ ಸಿಎಂ ಅಲ್ಲ, ರಾಜ್ಯದ ಮುಖ್ಯಮಂತ್ರಿ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರಿ ತಾಲೂಕಿನ ಬೆಳ್ಳೊಡಿ ಕನಕ ಮಠದಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಕುರುಬ ಸಮುದಾಯ ಹಾಗೂ ಅಲ್ಪಸಂಖ್ಯಾತರ ಬೆಂಬಲದಿಂದಾಗಿ ಕಾಂಗ್ರೆಸ್ 80 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅಂಥ ಪಕ್ಷದ ಬೆಂಬಲದಿಂದಾಗಿ ಸಮ್ಮಿಶ್ರ ಸರ್ಕಾರ ರಚನೆ ಆಗಿದೆ ಎಂಬುದನ್ನು ಮರೆಯಕೂಡದು ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನಿರಂಜನಾನಂದಪುರಿಶ್ರೀ ಎಚ್ಚರಿಸಿದ್ದಾರೆ.




