ಪ್ರಮುಖ ಸುದ್ದಿ

ಸಿಎಂ ಬದಲಾವಣೆ ಇಲ್ಲ ನಡ್ಡಾ ಅಭಯಃ BSY ನಿರಾಳ

ಸಿಎಂ ಬದಲಾವಣೆ ಇಲ್ಲ ನಡ್ಡಾ ಅಭಯಃ BSY ನಿರಾಳ

ವಿವಿ ಡೆಸ್ಕ್ಃ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.‌ ಆದರೆ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಿಎಂ ಬದಲಾವಣೆ ಇಲ್ಲ ಎಂದು ಯಡಿಯೂರಪ್ಪ ನವರಿಗೆ ತಿಳಿಸುವ ಮೂಲಕ ಸಿಎಂ ಬದಲಾವಣೆ ವಿಷಯಕ್ಕೆ ತೆರೆ ಎಳೆದಿದ್ದಾರೆ.

ಈ ವಿಷಯ ಸಿಎಂ ಬಿಎಸ್ ವೈ ಅವರಲ್ಲಿ ಆಶಾದಾಯಕ ಭರವಸೆ ಉತ್ಸಾಹ ಮೂಡಿದರೆ ಈ‌ ವಿಷಯದ ಹಿಂದೆ ಕೈ ಹಾಕಿದ್ದ ಹಲವರಿಗೆ ಇರಿಸು ಮುರಿಸು ಉಂಟಾಗಿದೆ ಎನ್ನಬಹುದು.
ನಡ್ಡಾ ಅವರು, ಸಿಎಂ ಬದಲಾವಣೆ ಇಲ್ಲ. ನೀವು ನಿರಾಳವಾಗಿ ಕೆಲಸ ಮಾಡಿ ಎಂದು ಯಡಿಯೂರಪ್ಪನವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸಿಎಂ ಕುಟುಂಬ ಹಾಗೂ‌‌ ಸ್ವತಃ‌ ಸಿಎಂ ಅವರಿಗೆ ಸಹಜವಾಗಿ ಸಂತಸ ಇಮ್ಮಡಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button