ಶಹಾಪುರಃ ಕೋಟೆಯಡಿ ಗೃಹರಕ್ಷಕ ದಳದಿಂದ ಧ್ವಜಾರೋಹಣ
ಮಳೆಯಲ್ಲಿ ನೆನೆದರೂ ಬತ್ತದ ಉತ್ಸಾಹ, ಸಂಭ್ರಮದ ಧ್ವಜಾರೋಹಣ
ಶಹಾಪುರ: ಬೆಟ್ಟದ ಮೇಲಿರುವ ಕೋಟೆಯ ಮೇಲೆ ಗೃಹ ರಕ್ಷಕದಳದದ ಸಿಬ್ಬಂದಿ ಪ್ರತಿ ವರ್ಷದಂತೆ ಈ ವರ್ಷವು ಕೊರೆಯುವ ಚಳಿ ಮತ್ತು ಮಳೆಯಲ್ಲಿಂಯನ್ನು ಲೆಕ್ಕಿಸದೆ ಸ್ವಾತಂತ್ರೋತ್ಸವ ಅಂಗವಾಗಿ ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಿ ದೇಶಭಕ್ತಿಗೆ ಸಾಕ್ಷಿಯಾದರು.
ಗೃಹ ರಕ್ಷಕ ದಳದ ಯೂನಿಟ್ ಅಧಿಕಾರಿ ಮಾರ್ಥಂಡಪ್ಪ ಮುಂಡಾಸ ನೇತೃತ್ವದಲ್ಲಿ ಸೀನಿಯರ್ ಪ್ಲಾಟ್ ಕಮಾಂಡರ್ ಮಲ್ಲಪ್ಪ ಕೊಂಬಿನ ಮತ್ತು ದೇವಿಂದ್ರಪ್ಪ ನಾಶಿ ಅವರ ಮಾರ್ಗದರ್ಶನದಲ್ಲಿ ಗೃಹ ರಕ್ಷಕದಳದ ಸಿಬ್ಬಂದಿ ನಸುಕಿನ 4ಗಂಟೆಗೆ ಬೆಟ್ಟಕ್ಕೆ ಹೋಗಿ ಧ್ವಜಾರೋಹಣ ನೆರವೇರಿಸಿದರು.
ನಂತರ ಹಳಪೇಟೆಯ ಜ್ಞಾನ ಗಂಗೋತ್ರಿ.ಹಿ.ಪ್ರಾ.ಶಾಲೆಯ ಆವರಣದಲ್ಲಿ ಗ್ರಾಮ ಲೇಖಪಾಲಕರಾದ ರಮೇಶ ಅವರು ಸಂಪ್ರದಾಯದಂತೆ ಧ್ವಜವಂದನೆ ಸ್ವೀಕರಿಸಿ ಮಾತನಾಡಿ, ಕೋವಿಡ್-19 ಸಂದರ್ಭದಲ್ಲಿಯೂ ಗೃಹ ರಕ್ಷಕದಳದವರ ಕಾರ್ಯ ಮೆಚ್ಚುವಂಥದ್ದು, ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗೆ ಮುಂದಾಗುವ ಮೂಲಕ ರಾಷ್ಟ್ರದ ಸಾರ್ವಭೌಮತೆಯನ್ನು ಎತ್ತಿಹಿಡಿಯುವುದು ಅಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಗೃಹ ರಕ್ಷದ ದಳದ ಸಿಬ್ಬಂದಿ ಮತ್ತು ಬಡಾವಣೆಯ ನಾಗರಿಕರು ಇದ್ದರು.