ಪ್ರಮುಖ ಸುದ್ದಿಬಸವಭಕ್ತಿ

ಪರಸಾಪುರದಲ್ಲಿ ಗುರು -ಶಿಷ್ಯರ ಪ್ರತಿಮೆ ಪ್ರತಿಷ್ಠಾಪನೆ

ಮೂರ್ತಿ ಮೆರವಣಿಗೆ, ಹೋಮ, ಹವನ ಪೂಜೆ

ಯಾದಗಿರಿ,ಶಹಾಪುರಃ ತಾಲೂಕಿನ ಪರಸಾಪುರ ಗ್ರಾಮದಲ್ಲಿ ದೇವಾನಂದ ಸ್ವಾಮಿ (ಗುರು) ಮತ್ತು ಇವರ ಶಿಷ್ಯರಾದ ಹಂಪಯ್ಯ ಸ್ವಾಮಿ (ಶಿಷ್ಯ) ಇವರ ಪ್ರತಿಮೆಗಳನ್ನು ಜೋಡಿಯಾಗಿ ಮೆರವಣಿಗೆ ಮೂಲಕ ಪ್ರತಿಷ್ಠಾಪನ ಸ್ಥಳದವರೆಗೆ ಮೆರವಣಿಗೆ ಮೂಲಕ ತಂದು ಹೋಮ ಹವನ ವಿಧಿ ವಿಧಾನ ಮೂಲಕ ನೆರವೇರಿಸಿ ಗುರು ಮತ್ತು ಶಿಷ್ಯ ಇಬ್ಬರ ಪ್ರತಿಮೆಗಳನ್ನು ಭಕ್ತಾಧಿಗಳು ಗ್ರಾಮದಲ್ಲಿ ಪ್ರತಿಷ್ಠಾಪಿಸಿದರು.

ಶನಿವಾರ ಬ್ರಹ್ಮೀ ಮುಹೂರ್ತದಲ್ಲಿ ಇಬ್ಬರು ಮಹಾನ್ ಪುರಷರ ಮೂರ್ತಿಗಳನ್ನು ಮಾಗಣಗೇರಿ ಡಾ.ವಿಶ್ವರಾಧ್ಯ ಶಿವಾಚಾರ್ಯ ಮತ್ತು ಗಂವಾರದ ಸೋಪಾನನಾಥ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕೈಕಂರ್ಯಗಳನ್ನು ನಡೆಸುವ ಮೂಲಕ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಲಕ್ಷ್ಮೀಪುರದ ಬಸವಲಿಂಗ ದೇವರ ಸಾರಥ್ಯದಲ್ಲಿ ಹೋಮ ಹವನ ನೆರವೇರಿದವು

ಮುಂಚಿತವಾಗಿ ಸಮೀಪದ ಬೀರನೂರ ದಿಂದ ಮೂರ್ತಿಗಳನ್ನು ಸುಮಂಗಲೆಯರು ಕುಂಭ ಹೊರುವ ಮೂಲಕ ಜೊತೆಗೆ ವಿವಿಧ ವಾದ್ಯ ವೃಂದ ಮತ್ತು ಹಲವರು ಪುರವಂತಿಗೆ ಸೇವೆಯೊಂದಿಗೆ ಪರಸಾಪುರ ಗ್ರಾಮದ ಸುಕ್ಷೇತ್ರದವರೆಗೂ ಮೆರವಣಿಗೆ ತರಲಾಯಿತು. ಸಮಾರಂಭದಲ್ಲಿ ಗ್ರಾಮಸ್ಥರು, ಭಕ್ತರು ಭಾಗವಹಿಸಿ ಪುನೀತರಾದರು. ಪ್ರಸಾದ ಸೇವೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button