ಪ್ರಮುಖ ಸುದ್ದಿ

ಮಹಾದಾಯಿ ವಿಚಾರಃ ಉತ್ತರ ಕರ್ನಾಟಕ ಬಂದ್ ಆದರೆ ಯಾದಗಿರಿಗೆ ಇಲ್ಲ ಬಂದ್ ಬಿಸಿ

ಯಾದಗಿರಿಃ ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಬಂದ್ ಆಚರಣೆಗೆ ಹಲವು ರೈತಪರ ಮತ್ತು ಕನ್ನಡಪರ ಸಂಘಟನೆಗಳು ನಿರ್ಧಾರ ಕೈಗೊಂಡಿರುವದರಿಂದ ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಬಂದ್ ಇರುವದಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜಿಲ್ಲೆ ಯಲ್ಲಿ ಯಾವುದೇ ಹೋರಾಟಗಳು ಇಲ್ಲ. ದೈನಂದಿನಂತೆ ಜನಜೀವನ ಸಾಗಲಿದೆ. ಯಾವುದೇ ಸಂಘಟನೆಗಳಿಂದ ಪ್ರತಿಭಟನೆ ಇರುವದಿಲ್ಲ. ಯಾರು ಪ್ರತಿಭಟನೆ ಬಗ್ಗೆ ತಿಳಿಸಿರುವದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button