ಪ್ರಮುಖ ಸುದ್ದಿ
KSRTC ಬಸ್ ಚಾಲಕ & ನಿರ್ವಾಹಕರಿಗೆ ಮೊಬೈಲ್ ಬಳಕೆ ನಿಷಿದ್ಧ!
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕ ಮತ್ತು ನಿರ್ವಾಹಕರು ಇನ್ನುಮುಂದೆ ಕರ್ತವ್ಯದ ಅವಧಿಯಲ್ಲಿ ಮೊಬೈಲ್ ಬಳಸಿದ್ದು ಕಂಡು ಬಂದಲ್ಲಿ ಅಮಾನತ್ತುಗೊಳ್ಳಲಿದ್ದಾರೆ. ಸೆಪ್ಟಂಬರ್ 1ರಿಂದ ಈ ಹೊಸ ಆದೇಶ ಜಾರಿಗೆ ಬರಲಿದೆ. ಸಂಭವನೀಯ ಅಪಘಾತಗಳಿಗೆ ಕಡಿವಾಣ ಹಾಕುವುದು ಹಾಗೂ ಸಾರಿಗೆ ಇಲಾಖೆಯ ಆದಾಯ ಸೋರಿಕೆ ತಡೆಗಟ್ಟುವ ದೃಷ್ಠಿಯಿಂದ ಈ ಹೊಸ ನಿಯಮವನ್ನು ಸಾರಿಗೆ ಇಲಾಖೆ ಜಾರಿಗೊಳಿಸಿದೆ ಎಂದು ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ತಿಳಿಸಿದ್ದಾರೆ.