ಪ್ರಮುಖ ಸುದ್ದಿ
ಕುತೂಹಲ ಕೆರಳಿಸಿದ ಸಚಿವ ಡಿಕೆಶಿ, ‘ರೆಬಲ್ ಸ್ಟಾರ್’ ಅಂಬರೀಶ್ ವಾಕ್ಸಮರ!
ಬೆಂಗಳೂರು: ನನ್ನ ಆರೋಗ್ಯದ ಬಗ್ಗೆ ಪ್ರಪಂಚಕ್ಕೆ ಗೊತ್ತಿದೆ. ಏರ್ ಅಂಬುಲೆನ್ಸ್ನಲ್ಲಿ ಹೋಗಿ ಆರೋಗ್ಯ ಸರಿಯಾಗಿ ಬಂದಿದ್ದೇನೆ. ನನಗೆ ಆರೋಗ್ಯ ಸಮಸ್ಯೆಯಿದ್ದು ಡಯಲಿಸಸ್ ಮಾಡಬೇಕಿದೆ ಎಂದಿರುವ ಡಿ.ಕೆ.ಶಿವಕುಮಾರ್ ಗೆ ಆರೋಗ್ಯದ ಜೊತೆ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಮೊದಲು ನಿವಾರಿಸಿಕೊಳ್ಳಲಿ ಎಂದು ಹೇಳುವ ಮೂಲಕ ಮಾಜಿ ಸಚಿವ, ನಟ ಅಂಬರೀಶ್ ಅವರು ಸಚಿವ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟ ಅಂಬರೀಶ್ ಎಂದಿನ ತಮ್ಮ ಸಹಜ ಶೈಲಿಯಲ್ಲೇ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ. ಆ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ತೊಡೆ ತಟ್ಟಿರುವ ನಟ ಅಂಬರೀಶ್ ನನ್ನ ಬಗ್ಗೆ ಯಾರೇ ಮಾತಾಡಿದರೂ ಎದಿರೇಟು ನೀಡದೆ ಇರೋದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅಂಬರೀಶ್ ಇತ್ತೀಚೆಗಷ್ಟೇ ಮಂಡ್ಯದಿಂದ ಮತ್ತೆ ಸ್ಪರ್ದಿಸುತ್ತೇನೆ. ಇಲ್ಲಿ ನಾನೇ ಬಾಸ್ ಎಂದಿರುವ ಬೆನ್ನಲ್ಲೇ ಕಾಂಗ್ರೆಸ್ಸಿನ ಈ ಇಬ್ಬರು ನಾಯಕರ ಮದ್ಯೆ ವಾಕ್ಸಮರ ನಡೆದಿದ್ದು ಕುತೂಹಲ ಕೆರಳಿಸಿದೆ